ಮಮತಾ (ಅನುವಾದ- ತಾಯಿಯ ಮಮತೆ ) ೧೯೬೬ರಲ್ಲಿ ತೆರೆಕಂಡ ಹಿಂದಿ ಭಾಷೆಯ ಚಲನಚಿತ್ರ. ಇದನ್ನು ಅಸಿಟ್ ಸೇನ್ ನಿರ್ದೇಶಿಸಿದ್ದಾರೆ. ಇದರ ಕತೆಯನ್ನು ನಿಹಾರ್ ರಂಜನ್ ಗುಪ್ತಾ ಮತ್ತು ಕ್ರಿಶನ್ ಚಂದರ್ ಬರೆದಿದ್ದಾರೆ. ಇದಕ್ಕೆ ರೋಷನ್ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಮಜ್ರೂಹ್ ಸುಲ್ತಾನ್ಪುರಿ ಹಾಡುಗಳನ್ನು ಬರೆದಿದ್ದಾರೆ. ಈ ಚಿತ್ರದಲ್ಲಿ ಸುಚಿತ್ರಾ ಸೇನ್, ಅಶೋಕ್ ಕುಮಾರ್ ಮತ್ತು ಧರ್ಮೇಂದ್ರ ನಟಿಸಿದ್ದಾರೆ. ಮಧ್ಯಮ ವರ್ಗದ ಜನರಲ್ಲಿರುವ ಭಯ ಮತ್ತು ವರ್ಗ ಸಂಘರ್ಷದ ಕುರಿತಾಗಿದೆ. ಈ ಚಿತ್ರದಲ್ಲಿ ಪ್ರಮುಖ ನಟಿ ಸುಚಿತ್ರಾ ಸೇನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಲತಾ ಮಂಗೇಶ್ಕರ್ ಹಾಡಿದ ರಾಹೆನ್ ನಾ ರಾಹೆನ್ ಹಮ್ ಮತ್ತು ಹೇಮಂತ್ ಕುಮಾರ್ ಅವರೊಂದಿಗಿನ ಯುಗಳ ಗೀತೆ ಚುಪ್ಪಾ ಲೋ ಯುನ್ ದಿಲ್ ಮೇ ಪ್ಯಾರ್ ಮೇರಾ ಹಾಡುಗಳು ಜನಪ್ರಿಯವಾಗಿದೆ. ರೋಷನ್ ಅವರ ಸಂಗೀತ ಮತ್ತು ಮಜ್ರೂಹ್ ಸುಲ್ತಾನ್ಪುರಿ ಅವರ ಸಾಹಿತ್ಯಕ್ಕಾಗಿ ಈ ಚಿತ್ರವು ಹೆಸರುವಾಸಿಯಾಗಿದೆ. ಈ ಚಿತ್ರವು ಅಸಿಟ್ ಸೇನ್ ಅವರ ಸ್ವಂತ ಬಂಗಾಳಿ ಚಿತ್ರವಾದ ಉತ್ತರ ಫಲ್ಗುನಿ (1963) ನ ರಿಮೇಕ್ ಆಗಿದೆ. ಇದರಲ್ಲೂ ಸುಚಿತ್ರಾ ಸೇನ್ ನಟಿಸಿದ್ದಾರೆ. == ಕಥಾವಸ್ತು == ಮೋನಿಶ್ ರಾಯ್ (ಅಶೋಕ್ ಕುಮಾರ್) ಶ್ರೀಮಂತ ಕುಟುಂಬದಿಂದ ಬಂದವನು ಮತ್ತು ಬಡ ಕುಟುಂಬದಿಂದ ಬಂದ ದೇವಯಾನಿಯನ್ನು (ಸುಚಿತ್ರಾ ಸೇನ್) ಪ್ರೀತಿಸುತ್ತಾನೆ. ಮೋನಿಶ್ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಪ್ರಯಾಣಿಸಲು ಬಯಸುತ್ತಾನೆ ಮತ್ತು ಇದಕ್ಕೆ ಅವನ ಕುಟುಂಬದಿಂದ ಹಣ ದೊರೆಯುತ್ತದೆ. ತನ್ನ ಕುಟುಂಬವು ದೇವಯಾನಿಯನ್ನು ಒಪ್ಪುವುದಿಲ್ಲ ಮತ್ತು ಅವಳನ್ನು ಮದುವೆಯಾಗುವ ತನ್ನ ಉದ್ದೇಶವನ್ನು ತಿಳಿಸಿದರೆ ತನ್ನ ವಿದೇಶಿ ಅಧ್ಯಯನಕ್ಕೆ ಹಣ ನೀಡಲು ನಿರಾಕರಿಸುತ್ತದೆ ಎಂದು ಅವನು ಹೆದರುತ್ತಾನೆ. ಆದ್ದರಿಂದ ಅವನು ಮತ್ತು ದೇವಯಾನಿಯು ಮೋನಿಶ್ ಭಾರತಕ್ಕೆ ಮರಳುವವರೆಗೆ ತಮ್ಮ ಮದುವೆಯನ್ನು ವಿಳಂಬಗೊಳಿಸಲು ಒಪ್ಪುತ್ತಾರೆ. ಮೋನಿಶ್ ಇಂಗ್ಲೆಂಡ್ಗೆ ತೆರಳಿದ ಸ್ವಲ್ಪ ಸಮಯದ ನಂತರ ದೇವಯಾನಿಯ ತಂದೆಗೆ ಆರ್ಥಿಕ ಸಮಸ್ಯೆ ಕಾಡುತ್ತದೆ . ಹಳೆಯ ಸಾಲಗಳನ್ನು ಮರುಪಾವತಿಸಲು ಅವನು ಹೊಸ ಸಾಲಗಳನ್ನು ತೆಗೆದುಕೊಳ್ಳುತ್ತಿದ್ದಾನೆ ಮತ್ತು ಈ ಹೊಸ ಸಾಲಗಳಲ್ಲಿ ಹೆಚ್ಚಿನವು ದೇವಯಾನಿಯ ತಂದೆಯ ಸ್ನೇಹಿತ ಮತ್ತು ಹಿತೈಷಿ ಎಂದು ಭಾವಿಸುವ ಒಬ್ಬ ರಾಖಲ್ನಿಂದ ಬಂದಿವೆ. ರಾಖಲ್ ವಾಸ್ತವವಾಗಿ ಒಬ್ಬ ನೀಚ ಮತ್ತು ಅಸಭ್ಯ ವ್ಯಕ್ತಿಯಾಗಿದ್ದು ಸುಂದರವಾದ ದೇವಯಾನಿಯ ಮೇಲೆ ಅವನ ಕಣ್ಣಿದೆ . ಒಂದು ನಿರ್ದಿಷ್ಟ ಸಮಯದಲ್ಲಿ ರಾಖಲ್ ತಳ್ಳಿಹಾಕಲು ಅಸಾಧ್ಯವಾಗುವಂತಹ ಪ್ರಸ್ತಾಪವನ್ನು ದೇವಯಾನಿಯ ತಂದೆಗೆ ಮಾಡುತ್ತಾನೆ. ಒಬ್ಬ ಸರಳ ಮತ್ತು ಸಭ್ಯ ವ್ಯಕ್ತಿಯಾಗಿರುವ ದೇವಯಾನಿಯ ತಂದೆ ರಾಖಲ್ ಒಬ್ಬ ಶ್ರೀಮಂತ ವ್ಯಕ್ತಿಯಾಗಿದ್ದು ಆತನನ್ನು ಮದುವೆಯಾದರೆ ದೇವಯಾನಿಯು ಆರಾಮದಾಯಕ ಜೀವನವನ್ನು ನಡೆಸುವುದರಿಂದ ರಾಖಲ್ ಅನ್ನು ಮದುವೆಯಾಗುವುದು ದೇವಯಾನಿಯ ಪಾಲಿಗೆ ಒಳ್ಳೆಯದು ಎಂದು ಭಾವಿಸುತ್ತಾರೆ. ಅವನು ತನ್ನ ಮಗಳನ್ನು ರಾಖಲ್ಗೆ ಮದುವೆ ಮಾಡಲು ಒಪ್ಪುತ್ತಾನೆ. ಗಾಬರಿಗೊಂಡ ದೇವಯಾನಿಯು ತನ್ನ ತಂದೆಗೆ ತಾನು ಮದುವೆಯಾಗಲು ಬಯಸುವುದಿಲ್ಲ ಎನ್ನುತ್ತಾಳೆ. ತನ್ನ ತಂದೆಯೊಂದಿಗೆ ವಾಸಿಸಲು ಮತ್ತು ಆತನ ವೃದ್ಧಾಪ್ಯದಲ್ಲಿ ಆತನನ್ನು ನೋಡಿಕೊಳ್ಳಲು ಬಯಸುತ್ತೇನೆ ಎಂದು ಹೇಳುತ್ತಾಳೆ. ಆದರೆ ತಂದೆ ಇದಕ್ಕೆ ಒಪ್ಪುವುದಿಲ್ಲ ಮತ್ತು ಮದುವೆಯ ದಿನಾಂಕವನ್ನು ನಿಗದಿಪಡಿಸುತ್ತಾರೆ . ಹತಾಶಳಾದ ದೇವಯಾನಿಯು ಆರ್ಥಿಕ ಸಹಾಯಕ್ಕಾಗಿ ಮೋನಿಶ್ನ ತಾಯಿಯನ್ನು ಸಂಪರ್ಕಿಸುತ್ತಾಳೆ. ಆದರೆ ಮೋನಿಶ್ನ ತಾಯಿ ಆ ಸಹಾಯ ಮಾಡುವುದಿಲ್ಲ. ಮದುವೆ ನಡೆಯುತ್ತದೆ. ದೇವಯಾನಿಯಕ್ಕಿಂತ ವಯಸ್ಸಿನಲ್ಲಿ ಸುಮಾರು ಹಿರಿಯನಾಗಿರುವ ರಾಖಲ್ ಅವಳನ್ನು ಆರಾಧಿಸಲು ಸ್ವಲ್ಪ ಪ್ರಯತ್ನ ಮಾಡುತ್ತಾಳೆ. ಆದರೆ ಅವಳು ಅವನನ್ನು ದ್ವೇಷಿಸುತ್ತಾಳೆ. ರಾಖಲ್ ಶೀಘ್ರದಲ್ಲೇ ದೇವಯಾನಿಯ ತಿರಸ್ಕಾರವಾದಿ ಮನೋಭಾವದಿಂದ ಬೇಸರ ಪಡುತ್ತಾನೆ . ಅವನು ಸಂಸಾರ ಜೀವನವನ್ನು ಬಿಟ್ಟು ತನ್ನ ಮದ್ಯಪಾನ ಮತ್ತು ಜೂಜಾಟದ ಮಿತ್ರರ ಬಳಿಗೆ ಹಿಂದಿರುಗುತ್ತಾನೆ. ದೇವಯಾನಿಯ ಮನೋಭಾವದಿಂದ ಅವಮಾನಕ್ಕೊಳಗಾದಾಗ ಆತ ಆಕೆಯ ಮೇಲೆ ಹಿಂಸಾಚಾರ ಮಾಡುತ್ತಾನೆ . ರಾಖಲ್ ತನ್ನ ತಂದೆಯಿಂದ ಸಾಕಷ್ಟು ಸಂಪತ್ತನ್ನು ಪಡೆದಿದ್ದನಾದರೂ ಅದನ್ನು ಸರಿಯಾಗಿ ಬಳಸುವುದಿಲ್ಲ. ಆತ ಮದ್ಯ, ಜೂಜು ಮತ್ತು ನೃತ್ಯ ಮಾಡುವ ಹುಡುಗಿಯರನ್ನು ಇಷ್ಟಪಡುವ ಒಬ್ಬ ನಿಷ್ಪ್ರಯೋಜಕ ಎಂಬುದನ್ನು ದೇವಯಾನಿ ಅರ್ಥ ಮಾಡಿಕೊಳ್ಳುತ್ತಾಳೆ . ಅವನು ತನ್ನ ಅನೇಕ ಕೆಟ್ಟ ಅಭ್ಯಾಸಗಳ ಮೇಲೆ ಹಣವನ್ನು ಖರ್ಚು ಮಾಡುತ್ತಾನೆ ಮತ್ತು ಅವನ ಹೆಚ್ಚಿನ ಹಣವು ಖರ್ಚಾಗಿ ಹೋಗುತ್ತದೆ . ದೇವಯಾನಿ ಶೀಘ್ರದಲ್ಲೇ ಗರ್ಭಿಣಿಯಾಗುತ್ತಾಳೆ ಮತ್ತು ಸುಪರ್ಣ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಈ ಸಮಯದಲ್ಲಿ ದೇವಯಾನಿಯ ತಂದೆ ಸಾಯುತ್ತಾರೆ. ಇದರೊಂದಿಗೆ ಆಕೆಗೆ ಸಹಾಯ ಮಾಡಬಲ್ಲ ಏಕೈಕ ವ್ಯಕ್ತಿಯೂ ಇಲ್ಲವಾಗುತ್ತಾರೆ. ವೇಶ್ಯಾಗೃಹವೊಂದರಲ್ಲಿ ಕುಡಿತದ ಅಮಲಿನಲ್ಲಿ ಜಗಳವಾಡಿದ ನಂತರ ಆಕೆಯ ಗಂಡನನ್ನು ಸ್ವಲ್ಪ ಸಮಯದವರೆಗೆ ಜೈಲಿನಲ್ಲಿಡಲಾಗುತ್ತದೆ. ಇದರೊಂದಿಗೆ ಅವನಲ್ಲಿದ್ದ ಹಣವು ಖಾಲಿಯಾಯಿತು ಎಂಬುದು ದೇವಯಾನಿಗೆ ತಿಳಿಯುತ್ತದೆ. ತನ್ನ ಮದುವೆ ಮತ್ತು ತನ್ನ ಪರಿಸ್ಥಿತಿಗಳಿಂದ ಅಸಮಾಧಾನಗೊಂಡ ದೇವಯಾನಿಯು ಓಡಿಹೋಗಿ ದೇವದಾಸಿ ಅಥವಾ ದೇವಾಲಯದ ನರ್ತಕಿಯಾಗಿ ಪುರುಷ ಗ್ರಾಹಕರಿಗೆ ಪ್ರದರ್ಶನ ನೀಡುತ್ತಾಳೆ. ಆದಾಗ್ಯೂ, ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ತನ್ನ ಮಗಳು ಸುಪರ್ಣಳನ್ನು ಅಪಹರಿಸಲು ಪ್ರಯತ್ನಿಸುವ ರಾಖಲ್ ಆಕೆಯನ್ನು ಪತ್ತೆಹಚ್ಚುತ್ತಾನೆ. ತಂದೆ ಮತ್ತು ಮಗಳ ಬೇರ್ಪಡಿಕೆಯನ್ನು ಖಚಿತಪಡಿಸಿಕೊಳ್ಳಲು, ದೇವಯಾನೀ ಸುಪರ್ಣವನ್ನು ಕ್ರಿಶ್ಚಿಯನ್ ಧರ್ಮಪ್ರಚಾರಕರು ನಡೆಸುತ್ತಿರುವ ಅನಾಥಾಶ್ರಮದಲ್ಲಿ ಬಿಟ್ಟು, ಸುಪರ್ಣಾವನ್ನು ದತ್ತು ಪಡೆಯಲು ನೀಡಬಾರದು ಮತ್ತು ಸಾಧ್ಯವಾದಾಗ ದೇವಯಾನಿಯೇ ಸುಪರ್ಣಳ ನಿರ್ವಹಣೆಗೆ ಕೊಡುಗೆ ನೀಡಬೇಕು ಎಂಬ ಷರತ್ತು ವಿಧಿಸುತ್ತಾಳೆ. ದೇವಯಾನೀ ಸಾಂಪ್ರದಾಯಿಕ ಶೈಲಿಯ ಕಥಾ (ಪುರುಷ ಪ್ರೇಕ್ಷಕರಿಗೆ ಹಾಡು ಮತ್ತು ನೃತ್ಯ ಪ್ರದರ್ಶನಗಳು, ಲೈಂಗಿಕ ಕೆಲಸ ನಿದರ್ಶನಗಳು ಕಡಿಮೆ ಇರುವಂತಹ ಪ್ರದರ್ಶನ) ನಲ್ಲಿ ಪುರುಷ ಪ್ರೇಕ್ಷಕರಿಗೆ ಹಾಡುವುದು ಮತ್ತು ನೃತ್ಯ ಮಾಡುವ ಮೂಲಕ ಜೀವನವನ್ನು ಸಾಗಿಸುವ ತನ್ನ ಯೋಜನೆಯಲ್ಲಿ ತನ್ನನ್ನು ತಾನು ಪೂರ್ಣ ಹೃದಯದಿಂದ ತೊಡಗಿಸಿಕೊಳ್ಳುತ್ತಾಳೆ. ಮೋನಿಶ್ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ನಗರಕ್ಕೆ ಮರಳುತ್ತಾನೆ. ಅವನು ಈಗಾಗಲೇ ದೇವಯಾನಿಯ ಮದುವೆಯ ಬಗ್ಗೆ ಕೇಳಿದ್ದಾನೆ. ಆದರೆ ಅವನಿಗೆ ಅವಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಮತ್ತು ಅವನು ತನ್ನ ಜೀವನದುದ್ದಕ್ಕೂ ಅವಿವಾಹಿತನಾಗಿದಯೇ ಉಳಿಯಲು ನಿರ್ಧರಿಸುತ್ತಾನೆ . ಒಮ್ಮೆ, ಬೀದಿಯಲ್ಲಿ, ಅವನು ದೇವಯಾನಿಯಂತೆ ಕಾಣುವ ಮಹಿಳೆಯನ್ನು ನೋಡುತ್ತಾನೆ ಮತ್ತು ಅವಳನ್ನು ಅದೇ ಹೆಸರಿನಿಂದ ಕರೆಯುತ್ತಾನೆ. ಆದರೆ ಅವಳು ಅವನತ್ತ ನೋಡುವುದಿಲ್ಲ . ಆತನನ್ನು ಗುರುತಿಸುವ ಯಾವುದೇ ಚಿಹ್ನೆಗಳಿಲ್ಲದೆ ಹತ್ತಿರದ ಟ್ಯಾಕ್ಸಿಯೊಳಗೆ ಕುಳಿತು ಮುಂದೆ ಸಾಗುತ್ತಾಳೆ . ತಾನು ಟ್ಯಾಕ್ಸಿಯಲ್ಲಿ ನೋಡಿದ ವ್ಯಕ್ತಿ ಲಕ್ನೋ ಮೂಲದ ತವಾಯಫ್, ಪನ್ನಾಬಾಯಿ ಎಂದು ಇತರರು ಮೋನಿಶ್ಗೆ ಹೇಳುತ್ತಾರೆ. ದೇವಯಾನೀ ಇನ್ನೂ ಬದುಕಿದ್ದಾರಾ? ಯಾರು ಪನ್ನಬಾಯಿ? ಸುಪರ್ಣಾಗೆ ಏನಾಯಿತು ಎಂಬುದೇ ಚಿತ್ರದ ಸಸ್ಪೆನ್ಸ್. ಈ ಚಿತ್ರವು ದೇವಯಾನಿಯ ಜೀವನದ ಕಥೆಯನ್ನು ಹೇಳುತ್ತದೆ ಮತ್ತು "ಮಮತಾ"-ತಾಯ್ತನ ಅಥವಾ ತಾಯಿಯ ಪ್ರೀತಿ, ತನ್ನ ಮಗುವಿನ ರಕ್ಷಣೆ ಮತ್ತು ಯೋಗಕ್ಷೇಮಕ್ಕಾಗಿ ತಾಯಿ ಏನು ಮಾಡುತ್ತಾಳೆ ಎಂದು ತಿಳಿಸುತ್ತದೆ. ತನ್ನ ಮಗುವು ಸ್ಥಾನಮಾನ, ಘನತೆ ಮತ್ತು ಪ್ರೀತಿಯಿಂದ ತುಂಬಿದ ಜೀವನವನ್ನು ನಡೆಸಲು ಆಕೆ ಮಾಡಿದ ಎಲ್ಲಾ ತ್ಯಾಗಗಳ ವಿಷಯದ ಸುತ್ತ ಸುತ್ತುತ್ತದೆ. ಹಿರಿಯ ನಟಿ (ಸುಚಿತ್ರಾ ಸೇನ್) ದೇವಯಾನಿ ಮತ್ತು ಸುಪರ್ಣ ಇಬ್ಬರ ದ್ವಿಪಾತ್ರದಲ್ಲಿ ನಟಿಸಿದ್ದಾರೆ. == ಕಾಸ್ಟ್ == ಧರ್ಮೇಂದ್ರ... ಬ್ಯಾರಿಸ್ಟರ್ ಇಂದ್ರನೀಲ್ ಸುಚಿತ್ರಾ ಸೇನ್... ದೇವ್ಯಾನಿ-ಪನ್ನಾಬಾಯಿ/ಸುಪರ್ಣ ಅಶೋಕ್ ಕುಮಾರ್ ಮೋನಿಶ್ ರಾಯ್ ಬಿಪಿನ್ ಗುಪ್ತಾ... ಕಾಂತಿಲಾಲ್ ಡೇವಿಡ್ ಅಬ್ರಹಾಂ... ಡಾಕ್ಟರ್ ಅಬ್ರಹಾಂ ತರುಣ್ ಬೋಸ್... ಮಹದೇವ್ ಪ್ರಸಾದ್ ಪಹಾರಿ ಸನ್ಯಾಲ್...ಕಾನೂನು ಕ್ರಮ ಕೈಗೊಳ್ಳುವ ವಕೀಲರು ಪ್ರತಿಮಾ ದೇವಿ... ತಾಯಿ ಮೇರಿ ಕಾಳಿಪಾಡ ಚಕ್ರವರ್ತಿ... ರಾಖಲ್ ಭಟ್ಟಾಚಾರ್ಯ ಛಾಯಾ ದೇವಿ... ಮೀನಾಬಾಯಿ ರಾಜಲಕ್ಷ್ಮಿ ದೇವಿ... ಪಾರ್ಟಿಯಲ್ಲಿ ಅತಿಥಿಗಳು ಚಮನ್ ಪುರಿ... ಘಿಸ್ತಾ ಬಾಬು-ದೇವಯಾನಿಯ ತಂದೆ (ಅನಧಿಕೃತ) ಅಸಿತ್ ಸೇನ್ -ಮಹಾದೇವ್ ಪ್ರಸಾದ್ ಪಾತ್ದರಲ್ಲಿ ನಟಿಸಿದ ನಿರ್ದೇಶಕರು ಜಹೊರ್ ರಾಯ್ == ಬಾಕ್ಸ್ ಆಫೀಸ್ == ಈ ಚಿತ್ರವು ದೇಶೀಯ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಇದು ಭಾರತದಲ್ಲಿ ₹12 ಮಿಲಿಯನ್ ಗಳಿಸುವ ಮೂಲಕ ವರ್ಷದ 15ನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿತ್ತು. ಇದು ಭಾರತದಲ್ಲಿ ಮಾರಾಟವಾದ ಅಂದಾಜು ೭.೨ ದಶಲಕ್ಷ ಟಿಕೆಟ್ಗಳ ಮಾರಾಟಕ್ಕೆ ಸಮನಾಗಿತ್ತು. ಈ ಚಿತ್ರವು ಸೋವಿಯತ್ ಒಕ್ಕೂಟದಲ್ಲಿ ಸಾಗರೋತ್ತರ ಬ್ಲಾಕ್ಬಸ್ಟರ್ ಆಯಿತು. 1969ರಲ್ಲಿ 52.1 ದಶಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಿತು. ಇದು ಸೋವಿಯತ್ ಒಕ್ಕೂಟದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಆರನೇ ಭಾರತೀಯ ಚಲನಚಿತ್ರವಾಯಿತು. ಇದು ಅಂದಾಜು 13 ದಶಲಕ್ಷ ಆರ್ಬಿಎಲ್ಗಳಿಗೆ [ 1] (14.4 ದಶಲಕ್ಷ, [ 2] ಅಥವಾ 108 ದಶಲಕ್ಷ ರೂ. [ 3] ಒಟ್ಟಾಗಿ ಈ ಚಲನಚಿತ್ರವು ವಿಶ್ವಾದ್ಯಂತ ಅಂದಾಜು ₹120 ದಶಲಕ್ಷವನ್ನು ಗಳಿಸಿತು. ಪ್ರೇಕ್ಷಕರ ದೃಷ್ಟಿಯಿಂದ, ಈ ಚಲನಚಿತ್ರವು ವಿಶ್ವಾದ್ಯಂತ ಅಂದಾಜು 59.3 ಕೋಟಿ ಟಿಕೆಟ್ಗಳನ್ನು ಮಾರಾಟ ಮಾಡಿತು. == ನಾಮನಿರ್ದೇಶನಗಳು == ಅತ್ಯುತ್ತಮ ಚಲನಚಿತ್ರಕ್ಕಾಗಿ ಫಿಲ್ಮ್ಫೇರ್ ನಾಮನಿರ್ದೇಶನಅತ್ಯುತ್ತಮ ಚಿತ್ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಫಿಲ್ಮ್ಫೇರ್ ನಾಮನಿರ್ದೇಶನ-ಅಸಿತ್ ಸೇನ್ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನ-ಸುಚಿತ್ರಾ ಸೇನ್ ಫಿಲ್ಮ್ಫೇರ್ ಅತ್ಯುತ್ತಮ ಕಥೆ ನಾಮನಿರ್ದೇಶನ-ನಿಹಾರ್ ರಂಜನ್ ಗುಪ್ತಾ == ಸಂಗೀತ == ಚಲನಚಿತ್ರಗಳ ಹಾಡುಗಳನ್ನು ರೋಷನ್ ಸಂಯೋಜಿಸಿದ್ದಾರೆ ಮತ್ತು ಮಜ್ರೂಹ್ ಸುಲ್ತಾನ್ಪುರಿ ಬರೆದಿದ್ದಾರೆ. == ಟಿಪ್ಪಣಿಗಳು == == ಉಲ್ಲೇಖಗಳು ==